ಸಭೆಯೊಂದು ನೆಡೆದಿರಲು ಸೃಷ್ಟಿಕರ್ತನ ಅಂಗಣದಲ್ಲಿ
ಬಂದಿರಲು ರಾಜ ರವಿ ವರ್ಮ ತನ್ನ ಕಲಾ ಪುಂಜದೊಂದಿಗೆ
ಬಿಡಿಸಿರಲು ಸುನಯನಳ ಕಣ್ಣುಗಳನ್ನು , ತಿದ್ದಿದನು ಆಕೆಯ ಕಾಮನಬಿಲ್ಲಿನಂತ ಉಬ್ಬುಗಳ್ಳನ್ನು
ಬೆರಗಾದ ಸೃಷ್ಟಿಕರ್ತ , ಈ ಅಂದವಾದ ಆಕಾರಕ್ಕೆ
ಜೀವವಿಲ್ಲವೇಕೆ ? ಯೋಚಿಸಲು
ಕಂಡಿತು ಒಂದು ಅಮೋಘವಾದ ಅದ್ಬುತ ಜೀವವಿತ್ತೋಡನೆ
ಕನಸಿಲ್ಲವೇಕೆ ?ಯೋಚಿಸಲು
ಕಂಡಿತು ನೂರಾರು ಕನಸುಗಳು ಕಣ್ಣರೆಪ್ಪೆಗಳ ಅಂಚಿನಲ್ಲಿ
ಇನಿಯನಿಲ್ಲನೇಕೆ ? ಕನಸೊಂದು ಕೇಳಿರಲು
ಒಲವು ಮೂಡಿರಲು , ಬಯಕೆ ತೀರಿರಲು
ಮನಸೇಂಬ ಗಾಳಿಪಟ ಹಾರಲು, ಹಾಡಲು...
ರೆಕ್ಕೆ ತಪ್ಪಿದ ಭಾವನೆಗಳು , ಆ ಕನಸು ಮುರುಗುತ್ತಾ
ರೆಪ್ಪೆಗಳ ದಡದಲ್ಲಿ ಭಾವನೆಯೆಂಬ ಸಾಗರದ ಭೋರ್ಗರೆತ
ನನಸಾಗಲಿಲ್ಲವೇಕೆ ? ಸೃಷ್ಟಿಕರ್ತನಿಗೆ ಕೇಳಿರಲು
ಕನಸು ನನ್ನದಾಗಿರಲು
ಭಾವನೆಗಳು ಕಾಣಸಿನದ್ದಾಗಿರಲು
ಅರಿಯದೇ ಮುಂದುವರಿದೆಯಾ ಓ ಕನಸೇ
ಮತ್ತೊಮ್ಮೆ ಅಪ್ಪಳಿಸು ಒಲವೊಂದು ಕಾಯುತ್ತಿರಲು
-ಪುರು
ಬಂದಿರಲು ರಾಜ ರವಿ ವರ್ಮ ತನ್ನ ಕಲಾ ಪುಂಜದೊಂದಿಗೆ
ಬಿಡಿಸಿರಲು ಸುನಯನಳ ಕಣ್ಣುಗಳನ್ನು , ತಿದ್ದಿದನು ಆಕೆಯ ಕಾಮನಬಿಲ್ಲಿನಂತ ಉಬ್ಬುಗಳ್ಳನ್ನು
ಬೆರಗಾದ ಸೃಷ್ಟಿಕರ್ತ , ಈ ಅಂದವಾದ ಆಕಾರಕ್ಕೆ
ಜೀವವಿಲ್ಲವೇಕೆ ? ಯೋಚಿಸಲು
ಕಂಡಿತು ಒಂದು ಅಮೋಘವಾದ ಅದ್ಬುತ ಜೀವವಿತ್ತೋಡನೆ
ಕನಸಿಲ್ಲವೇಕೆ ?ಯೋಚಿಸಲು
ಕಂಡಿತು ನೂರಾರು ಕನಸುಗಳು ಕಣ್ಣರೆಪ್ಪೆಗಳ ಅಂಚಿನಲ್ಲಿ
ಇನಿಯನಿಲ್ಲನೇಕೆ ? ಕನಸೊಂದು ಕೇಳಿರಲು
ಒಲವು ಮೂಡಿರಲು , ಬಯಕೆ ತೀರಿರಲು
ಮನಸೇಂಬ ಗಾಳಿಪಟ ಹಾರಲು, ಹಾಡಲು...
ರೆಕ್ಕೆ ತಪ್ಪಿದ ಭಾವನೆಗಳು , ಆ ಕನಸು ಮುರುಗುತ್ತಾ
ರೆಪ್ಪೆಗಳ ದಡದಲ್ಲಿ ಭಾವನೆಯೆಂಬ ಸಾಗರದ ಭೋರ್ಗರೆತ
ನನಸಾಗಲಿಲ್ಲವೇಕೆ ? ಸೃಷ್ಟಿಕರ್ತನಿಗೆ ಕೇಳಿರಲು
ಕನಸು ನನ್ನದಾಗಿರಲು
ಭಾವನೆಗಳು ಕಾಣಸಿನದ್ದಾಗಿರಲು
ಅರಿಯದೇ ಮುಂದುವರಿದೆಯಾ ಓ ಕನಸೇ
ಮತ್ತೊಮ್ಮೆ ಅಪ್ಪಳಿಸು ಒಲವೊಂದು ಕಾಯುತ್ತಿರಲು
-ಪುರು
No comments:
Post a Comment