Sunday, 11 December 2016

ಒಲವೊಂದು ಮೂಡಿರಲು ಕನಸಿನಲ್ಲಿ

ಸಭೆಯೊಂದು ನೆಡೆದಿರಲು ಸೃಷ್ಟಿಕರ್ತನ ಅಂಗಣದಲ್ಲಿ 
ಬಂದಿರಲು ರಾಜ ರವಿ ವರ್ಮ ತನ್ನ ಕಲಾ ಪುಂಜದೊಂದಿಗೆ 
ಬಿಡಿಸಿರಲು ಸುನಯನಳ ಕಣ್ಣುಗಳನ್ನು , ತಿದ್ದಿದನು ಆಕೆಯ ಕಾಮನಬಿಲ್ಲಿನಂತ ಉಬ್ಬುಗಳ್ಳನ್ನು 

ಬೆರಗಾದ ಸೃಷ್ಟಿಕರ್ತ , ಈ ಅಂದವಾದ ಆಕಾರಕ್ಕೆ 
ಜೀವವಿಲ್ಲವೇಕೆ ? ಯೋಚಿಸಲು 
ಕಂಡಿತು ಒಂದು ಅಮೋಘವಾದ ಅದ್ಬುತ ಜೀವವಿತ್ತೋಡನೆ 
ಕನಸಿಲ್ಲವೇಕೆ ?ಯೋಚಿಸಲು 
ಕಂಡಿತು ನೂರಾರು ಕನಸುಗಳು ಕಣ್ಣರೆಪ್ಪೆಗಳ ಅಂಚಿನಲ್ಲಿ 
ಇನಿಯನಿಲ್ಲನೇಕೆ ? ಕನಸೊಂದು ಕೇಳಿರಲು 
ಒಲವು ಮೂಡಿರಲು , ಬಯಕೆ ತೀರಿರಲು 
ಮನಸೇಂಬ ಗಾಳಿಪಟ ಹಾರಲು, ಹಾಡಲು... 

ರೆಕ್ಕೆ ತಪ್ಪಿದ ಭಾವನೆಗಳು , ಆ ಕನಸು ಮುರುಗುತ್ತಾ 
ರೆಪ್ಪೆಗಳ ದಡದಲ್ಲಿ ಭಾವನೆಯೆಂಬ ಸಾಗರದ ಭೋರ್ಗರೆತ 

ನನಸಾಗಲಿಲ್ಲವೇಕೆ ? ಸೃಷ್ಟಿಕರ್ತನಿಗೆ ಕೇಳಿರಲು 
ಕನಸು ನನ್ನದಾಗಿರಲು 
ಭಾವನೆಗಳು  ಕಾಣಸಿನದ್ದಾಗಿರಲು 
ಅರಿಯದೇ  ಮುಂದುವರಿದೆಯಾ ಓ ಕನಸೇ 
ಮತ್ತೊಮ್ಮೆ ಅಪ್ಪಳಿಸು ಒಲವೊಂದು ಕಾಯುತ್ತಿರಲು 

                                                                            -ಪುರು 

No comments:

Post a Comment